ಕೋರ್ಟ್ ಹೊರಗೆ ವಿವಾದ ಇತ್ಯರ್ಥವಾದ್ರೆ ನ್ಯಾಯಾಲಯ ಶುಲ್ಕ ಮರುಪಾವತಿಗೆ ಅವಕಾಶವಿದೆಯೇ? ಸುಪ್ರೀಂ ಕೊಟ್ಟ ಸ್ಪಷ್ಟನೆಯಿದು?
ನವದೆಹಲಿ: ದಾವೆಯ ಪಕ್ಷಕಾರರು ಖಾಸಗಿಯಾಗಿ ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯ ಶುಲ್ಕ ಮರುಪಾವತಿಗೆ ಅವಕಾಶವಿದೆಯೇ ಅಥವಾ ಇಲ್ಲವೇ ಎಂಬ ಗೊಂದಲಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ.
ಮಾನ್ಯತೆ ಪಡೆದ “ವಿವಾದ ಪರಿಹಾರ ಕಾರ್ಯವಿಧಾನ”ದ ಮೂಲಕ ಇತ್ಯರ್ಥವಾದಾಗ ಮಾತ್ರ ನ್ಯಾಯಾಲಯದ ಶುಲ್ಕ ಮರುಪಾವತಿಗೆ ಅವಕಾಶವಿದೆ. ಆದರೆ ದಾವೆಯ ಪಕ್ಷಕಾರರು ನ್ಯಾಯಾಲಯದ ಹೊರಗೆ ಖಾಸಗಿಯಾಗಿ ವಿವಾದ ಇತ್ಯರ್ಥಪಡಿಸಿಕೊಂಡರೇ ನ್ಯಾಯಾಲಯ ಶುಲ್ಕ ಮರುಪಾವತಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಹೊರಗಿನ ಖಾಸಗಿ ಇತ್ಯರ್ಥದ ಮೂಲಕ ವಿವಾದವನ್ನು ಪರಿಹರಿಸಲಾಗಿದೆ ಎಂಬ ಆಧಾರದ ಮೇಲೆ ನ್ಯಾಯಾಲಯದ ಶುಲ್ಕವನ್ನು ಮರುಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.ಈ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥೈಲ್ ಮತ್ತು ನ್ಯಾಯಮೂರ್ತಿ ಅಹ್ವಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಮಧ್ಯಸ್ಥಿಕೆ, ರಾಜಿ, ನ್ಯಾಯಾಂಗ ಇತ್ಯರ್ಥ ಲೋಕ ಅದಾಲತ್ ಅಥವಾ ಮಧ್ಯಸ್ಥಿಕೆಯ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದಾಗ ಮಾತ್ರ ನ್ಯಾಯಾಲಯದ ಶುಲ್ಕ ಮರುಪಾವತಿಗೆ ಅವಕಾಶವಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಇತ್ಯರ್ಥವು ಕಾನೂನುಬದ್ದವಾಗಿ ಗುರುತಿಸಲ್ಪಟ್ಟ ಈ ಯಾವುದೇ ಕಾರ್ಯವಿಧಾನಗಳ ಮೂಲಕ ನಡೆಯದ ಕಾರಣ, ಅರ್ಜಿದಾರರು ಮರುಪಾವತಿಗೆ ಅರ್ಹರಾಗಿರಲಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಈ ಪ್ರಕರಣವು ಹೈಕೋರ್ಟ್ ನಲ್ಲಿ ಎರಡನೇ ಮೇಲ್ಮನವಿ ಸಲ್ಲಿಸಲ್ಪಟ್ಟಿದ್ದು, ಕಕ್ಷಿದಾರರ ನಡುವೆ ಉಂಟಾದ ಪರಸ್ಪರ ಇತ್ಯರ್ಥದ ಅಧಾರದ ಮೇಲೆ ಅದನ್ನು ಇತ್ಯರ್ಥಪಡಿಸಲಾಯಿತು. ಇತ್ಯರ್ಥದ ನಂತರ, ಅರ್ಜಿದಾರರಾದ ಜೇಜ್ ರಾಮ್, ವಿಚಾರಣಾ ನ್ಯಾಯಾಲಯ. ಮೂದಲ ಮೇಲ್ಮನವಿ ನ್ಯಾಯಾಲಯ ಮತ್ತು ಎರಡನೇ ಮೇಲ್ಮನವಿ ನ್ಯಾಯಾಲಯ ಎಂಬ ಮೂರು ಹಂತಗಳಲ್ಲಿ ಪಾವತಿಸಿದ ನ್ಯಾಯಾಲಯ ಶುಲ್ಕವನ್ನು ಮರುಪಾವತಿಸುವಂತೆ ಕೋರಿದರು. ಇದು ಎರಡನೇ ಮೇಲ್ಮನವಿಯಲ್ಲಿ ರೂ. 29,053 ಆಗಿತ್ತು. ಕಾನೂನಿನಡಿಯಲ್ಲಿ ಗುರುತಿಸಲ್ಪಟ್ಟ ಪರ್ಯಾಯ ವಿವಾದ ಪರಿಹಾರ (ಂಆಖ) ಕಾರ್ಯವಿಧಾನದ ಮೂಲಕ ವಿಷಯವನ್ನು ಪರಿಹರಿಸಿದ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯದ ಶುಲ್ಕವನ್ನು ಮರುಪಾವತಿಸಬಹುದು ಎಂದು ತೀರ್ಪು ನೀಡಿದ ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತು. ಈ ನಿರ್ಧಾರದಿಂದ ಬೇಸತ್ತ ಅರ್ಜಿದಾರರು ವಿಶೇಷ ಅನುಮತಿ ಅರ್ಜಿ (SಐP) ಅಡಿಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋದರು.
ಮಧ್ಯಸ್ಥಿಕೆ, ರಾಜಿ, ಮಧ್ಯಸ್ಸಿಗೆ ಅಥವಾ ಲೋಕ ಅದಾಲತ್ ಗಳನ್ನು ಖಾಸಗಿಯಾಗಿ ಮತ್ತು ನ್ಯಾಯಾಲಯದ ಹೊರಗೆ ಪ್ರಕರಣವನ್ನು ಇತ್ಯರ್ಥಪಡಿಸಿದಾಗ ನ್ಯಾಯಾಲಯದ ಶುಲ್ಕವನ್ನು ಮರುಪಾವತಿಸಲು ಕಾನೂನುಬದ್ಧವಾಗಿ ಅನುಮತಿ ಇದೆಯೇ ಎಂದು ಸುಪ್ರೀಂ ಕೋರ್ಟ್ ಪರಿಶೀಲಿಸಿತು.
ವಿಷಯವನ್ನು ಲೋಕ ಅದಾಲತ್ ಅಥವಾ ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆ, ರಾಜಿ, ನ್ಯಾಯಾಂಗ ಇತ್ಯರ್ಥಕ್ಕೆ ಉಲ್ಲೇಖಿಸಿದರೆ ಮತ್ತು ಪ್ರಕರಣವನ್ನು ಅಂತಹ ಇತ್ಯರ್ಥದ ಪ್ರಕಾರ ನಿರ್ಧರಿಸಿದರೆ ಮತ್ತು ಬೇರೆ ರೀತಿಯಲ್ಲಿ ಅಲ್ಲದಿದ್ದರೆ ಮಾತ್ರ ನ್ಯಾಯಾಲಯ ಶುಲ್ಕವನ್ನು ಮರುಪಾವತಿಸಲು ಅನುಮತಿ ಇದೆ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಪ್ರಸ್ತುತ ಪ್ರಕರಣವು ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆ ಖಾಸಗಿ ಇತ್ಯರ್ಥವನ್ನು ಒಳಗೊಂಡಿರುವುದರಿಂದ, ಅರ್ಜಿದಾರರು “ನ್ಯಾಯಾಲಯ ಶುಲ್ಕವನ್ನು ಮರುಪಾವತಿಸಲು ಅರ್ಹರಲ್ಲ ಮತ್ತು ಅಂತಹ ಪ್ರಾರ್ಥನೆಯನ್ನು ನಿರಾಕರಿಸುವಲ್ಲಿ ಹೈಕೋರ್ಟ್ ಯಾವುದೇ ತಪ್ಪು ಅಥವಾ ಕಾನೂನುಬಾಹಿರತೆಯನ್ನು ಮಾಡಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿದೆ.
1870 ರ ನ್ಯಾಯಾಲಯ ಶುಲ್ಕ ಕಾಯ್ದೆಯ ಸೆಕ್ಷನ್ 16 ರ ಅಡಿಯಲ್ಲಿ ಖಾಸಗಿ ಇತ್ಯರ್ಥವು ನ್ಯಾಯಾಲಯ ಶುಲ್ಕ ಮರುಪಾವತಿಗೆ ಅರ್ಹವಲ್ಲ ಎಂಬ ನಿಯಮವಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
