ಉಯಿಲು ಕಾರ್ಯರೂಪಕ್ಕೆ ತರಲು ಇನ್ಮುಂದೆ ‘ಪ್ರೊಬೇಟ್’ ಕಡ್ಡಾಯವಲ್ಲ
ನವದೆಹಲಿ: ಭಾರತದ ಯಾವುದೇ ಭಾಗದಲ್ಲಿ ಉಯಿಲುಗಳಲ್ಲಿ ಕಡ್ಡಾಯವಾಗಿರುವ ಪ್ರೊಬೇಟ್ (ಪ್ರಮಾಣಿತ ಇಚ್ಛಾ ಪತ್ರ) ಇನ್ಮುಂದೆ ಅಗತ್ಯವಿಲ್ಲ. ಹೌದು, ಭಾರತದಲ್ಲಿ ಈಗ ಉಯಿಲುಗಳಿಗೆ ಪ್ರೊಬೇಟ್ ಕಡ್ಡಾಯವಲ್ಲ, ಆದರೆ ಹಿಂದಿನಂತೆ ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ ಕೆಲವು ಸಂದರ್ಭಗಳಲ್ಲಿ ಕಡ್ಡಾಯವಾಗಿತ್ತು, ಆದರೆ ಈಗ ಸರ್ಕಾರ ಈ ಕಡ್ಡಾಯವನ್ನು ರದ್ದುಗೊಳಿಸಿದೆ.
ದಾಖಲೆ ನೈಜವಾದುದು ಎಂದು ಅಧಿಕೃತವಾಗಿ ದೃಢಪಡಿಸುವ ನ್ಯಾಯಾಲಯದ ಪ್ರಕ್ರಿಯೆಯಾದ ಪ್ರೊಬೇಟ್ ಇನ್ನು ಮುಂದೆ ಉಯಿಲುಗಳಲ್ಲಿ ಅಗತ್ಯವಿರುವುದಿಲ್ಲ. ಈ ರದ್ದತಿ ಮತ್ತು ತಿದ್ದುಪಡಿ ಕಾಯ್ದೆ 2025ಗೆ ಡಿಸೆಂಬರ್ 20ರಂದು ರಾಷ್ಟ್ರಪತಿಯವರ ಒಪ್ಪಿಗೆ ದೊರೆತಿದೆ.
ಈ ಕಾಯ್ದೆ ಭಾರತೀಯ ಉತ್ತರಾಧಿಕಾರ ಕಾಯ್ದೆ 1925ರಲ್ಲಿರುವ ಒಂದು ಸೆಕ್ಷನ್ ಅನ್ನು ರದ್ದುಗೊಳಿಸಿದೆ. ಈ ಸೆಕ್ಷನ್ ನಿಂದಾಗಿ ಕುಟುಂಬಗಳು ಯಾವುದೇ ಒಂದು ಉಯಿಲನ್ನು ಕಾರ್ಯರೂಪಕ್ಕೆ ತರಬೇಕೆಂದರೆ ನ್ಯಾಯಾಲಯದ ಸಮ್ಮುಖ ಇಡಬೇಕಾಗಿತ್ತು. ದಶಕಗಳಿಂದ ಪ್ರೊಬೇಟ್ ಅಗತ್ಯವಿದ್ದ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲೂ ಹೊಸ ಕಾಯ್ದೆ ಜಾರಿಗೆ ಬರಲಿದೆ.
ಇದು ನ್ಯಾಯಾಲಯವು ಉಯಿಲಿನ (Will) ಮಾನ್ಯತೆಯನ್ನು ದೃಢೀಕರಿಸುವ ಪ್ರಕ್ರಿಯೆಯಾಗಿದ್ದು, ಕಾರ್ಯನಿರ್ವಾಹಕರಿಗೆ (Executor) ಆಸ್ತಿಗಳನ್ನು ಹಂಚಲು ಅಧಿಕಾರ ನೀಡುತ್ತದೆ. ಭಾರತೀಯ ಉತ್ತರಾಧಿಕಾರ ಕಾಯಿದೆ, 1925 ರ ಪ್ರಕಾರ, ಹಿಂದೂಗಳು, ಬೌದ್ಧರು, ಸಿಖ್ಖರು ಮತ್ತು ಜೈನರು ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಮಹಾನಗರಗಳ ವ್ಯಾಪ್ತಿಯಲ್ಲಿ ಮಾಡಿದ ಉಯಿಲುಗಳಿಗೆ ಪ್ರೊಬೇಟ್ ಕಡ್ಡಾಯವಾಗಿತ್ತು.
ಈಗ ಉತ್ತರಾಧಿಕಾರ ಕಾಯ್ದೆಗಳಲ್ಲಿ ನ್ಯಾಯಾಲಯ ಹೇಗೆ ಮತ್ತು ಯಾವಾಗ ಮಧ್ಯಪ್ರವೇಶ ಮಾಡಬಹುದು ಎನ್ನುವುದನ್ನು ಬದಲಿಸಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಮುಂದಿಟ್ಟ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್, “ಸಮಕಾಲೀನ ಉತ್ತರಾಧಿಕಾರದೊಂದಿಗೆ ಹೊಂದಿಕೆಯಾಗದ ನಿಬಂಧನೆಯಾದ 1925ರ ಕಾನೂನಿನ ಸೆಕ್ಷನ್ 213ರನ್ನು ತೆಗೆದು ಹಾಕಿರುವುದರಿಂದ ಭೌಗೋಳಿಕವಾಗಿ ಸೀಮಿತವಾಗಿದ್ದ ಮತ್ತು ಸಮುದಾಯ-ನಿರ್ದಿಷ್ಟವಾಗಿದ್ದ ಲೋಪವನ್ನು ಸರಿಪಡಿಸಲಾಗಿದೆ” ಎಂದು ಹೇಳಿದ್ದಾರೆ.
ಪ್ರೊಬೇಟ್ ಅಂದರೆ ಏನು..?
ಭಾರತೀಯ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 2(ಎಫ್) ಅಡಿಯಲ್ಲಿ ವ್ಯಾಖ್ಯಾನಿಸಲಾದ ಪ್ರೊಬೇಟ್ ಎಂದರೆ ಒಬ್ಬ ವ್ಯಕ್ತಿ ಮೃತಪಟ್ಟಾಗ, ನಿರ್ದಿಷ್ಟವಾಗಿ ಅವರು ಮಾನ್ಯವಾದ ಉಯಿಲು ಮಾಡಿದಾಗ ಹೊಂದಿರುವ ಎಲ್ಲಾ ಆಸ್ತಿಗಳಿಗೆ ಆಡಳಿತದ ಮಂಜೂರಾತಿಯೊಂದಿಗೆ ಸಮರ್ಥ ನ್ಯಾಯ ವ್ಯಾಪ್ತಿಯ ನ್ಯಾಯಾಲಯದ ಮುದ್ರೆಯಡಿಯಲ್ಲಿ ಪ್ರಮಾಣೀಕರಿಸಲಾದ ಉಯಿಲಿನ ಪ್ರತಿ. ಉಯಿಲನ್ನು ಪ್ರೊಬೇಟ್ ಗೆ ಕಳುಹಿಸಿದಾಗ ಅದನ್ನು ಸರಿಯಾಗಿ ಸಹಿ ಹಾಕಲಾಗಿದೆ ಮತ್ತು ಸಾಕ್ಷಿಗಳು ಸರಿಯಾಗಿವೆಯೇ, ಆ ಉಯಿಲನ್ನು ಮಾಡುವಾಗ ವ್ಯಕ್ತಿಯ ಮನೋಸ್ಥಿತಿ ಸಮರ್ಪಕವಾಗಿತ್ತೇ? ಮತ್ತು ದಾಖಲೆ ಅಧಿಕೃತವೇ? ಎಂದು ನ್ಯಾಯಾಲಯ ಪರಿಶೀಲಿಸುತ್ತದೆ. ಎಲ್ಲವೂ ಸರಿಯಿದೆ ಎಂದು ಅನಿಸಿದಾಗ ನ್ಯಾಯಾಲಯ ಪ್ರೊಬೇಟ್ ಆದೇಶವನ್ನು ನೀಡುತ್ತದೆ. ಅದರಿಂದ ಮರಣ ಹೊಂದಿದ ವ್ಯಕ್ತಿಯ ಇಚ್ಛೆಯ ಪ್ರಕಾರ ಆಸ್ತಿಯನ್ನು ನಿರ್ವಹಿಸಲು ಕಾರ್ಯನಿರ್ವಾಹಕರಿಗೆ ಕಾನೂನುಬದ್ದ ಅಧಿಕಾರವನ್ನು ಸಿಗುತ್ತದೆ.
ವ್ಯಕ್ತಿಯು ಉಯಿಲುರಹಿತವಾಗಿ ಮೃತಪಟ್ಟಾಗ ಈ ಅಗತ್ಯಕ್ಕೆ ವಿರುದ್ಧವಾದ ಉತ್ತರಾಧಿಕಾರ ಚಾಲ್ತಿಯಲ್ಲಿರುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ಕೆ 1956ರ ಅಡಿಯಲ್ಲಿ ಯಾವುದೇ ಪ್ರೊಬೇಟ್ ಅಥವಾ ನ್ಯಾಯಾಲಯದ ಮಾನ್ಯತೆಯ ಅಗತ್ಯವಿಲ್ಲದೆ ಆಸ್ತಿಗೆ ಕಾನೂನಾತ್ಮಕ ವಾರಸುದಾರರಿಗೆ ಹಸ್ತಾಂತರವಾಗುತ್ತದೆ. ಹೀಗಾಗಿ ಉಯಿಲು ಬರೆಯದ ವ್ಯಕ್ತಿಯು ಉಯಿಲು ಬರೆದ ವ್ಯಕ್ತಿಗಿಂತ ಸುಲಭವಾಗಿ ಆಸ್ತಿಯ ಅಧಿಕಾರವನ್ನು ತಮ್ಮ ವಾರಸುದಾರರಿಗೆ ಹಸ್ತಾಂತರಿಸುತ್ತಾರೆ.
ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲೂ ಉಯಿಲು ಕಾರ್ಯರೂಪಕ್ಕೆ ಬರಲು ಪ್ರೊಬೇಟ್ ಅಗತ್ಯ ಇರುವುದಿಲ್ಲ. ನ್ಯಾಯಾಲಯಗಳು ಉಯಿಲನ್ನು ಜಾರಿಗೊಳಿಸಲು ಅದನ್ನು ಎಲ್ಲಿ ಕಾರ್ಯಗತಗೊಳಿಸಲಾಗಿದೆ ಮತ್ತು ಅವುಗಳನ್ನು ಬರೆದ ವ್ಯಕ್ತಿಯ ಸಮುದಾಯವನ್ನು ಅವಲಂಬಿಸಿದೆ ಎನ್ನುವ ನಿಯಮವನ್ನು ನೋಡುವ ಅಗತ್ಯವಿರುವುದಿಲ್ಲ. ಉಯಿಲಿಗೆ ವಿರೋಧವಿಲ್ಲದ ಸಂದರ್ಭದಲ್ಲಿ ಇದರಿಂದಾಗಿ ಸಮಯ, ವೆಚ್ಚ ಮತ್ತು ವ್ಯಾಜ್ಯದ ಸಮಯ ಉಳಿತಾಯವಾಗಿದೆ.
ಹಾಗೆಂದು ಪ್ರೊಬೇಟ್ ಅಪ್ರಸ್ತುತವೇನೂ ಆಗಿಲ್ಲ. ಇದು ಪ್ರೊಬೇಟ್ ಅನ್ನು ಕಡ್ಡಾಯದಿಂದ ಆಯ್ಕೆಯಾಗಿ ಪರಿವರ್ತಿಸಿದೆ. ನ್ಯಾಯಾಲಯಗಳು ಇನ್ನೂ ಅಗತ್ಯವಿದ್ದರೆ ಪ್ರೊಬೇಟ್ ಅನ್ನು ಅನುಸರಿಸಬಹುದಾಗಿದೆ. ಬ್ಯಾಂಕ್ಗಳು, ವಸತಿ ಸಮಾಜಗಳು ಮತ್ತು ರಿಜಿಸ್ಟ್ರಾರ್ ಗಳು ನ್ಯಾಯಾಲಯಗಳಲ್ಲ. ಪ್ರೊಬೇಟ್ ಇರುವ ಉಯಿಲು ಭವಿಷ್ಯದ ನ್ಯಾಯಾಲಯದ ಹಕ್ಕಿಗೆ ನೆರವಾಗಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
