23/04/2026

Law Guide Kannada

Online Guide

ಕೃತಕ ಬುದ್ಧಿಮತ್ತೆ ಬಳಕೆ: ಕೋರ್ಟ್ ಸಮಯ ವ್ಯರ್ಥ ಮಾಡಿದ ವಕೀಲನಿಗೆ ಹೈ ಕೋರ್ಟ್ ವಾರ್ನಿಂಗ್

ಮುಂಬೈ: ಕೃತಕ ಬುದ್ಧಿಮತ್ತೆ (AI) ಬಳಸಿ ಅಸ್ತಿತ್ವದಲ್ಲಿ ಇಲ್ಲದ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯದ ಅಮೂಲ ವೇಳೆಯನ್ನು ವ್ಯರ್ಥ ಮಾಡಿದ ವಕೀಲನಿಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಎಂ. ಸಠಾಯೆ ಅವರ ಏಕಸದಸ್ಯ ಪೀಠವು ವಕೀಲನಿಗೆ ಎಚ್ಚರಿಕೆ ನೀಡಿದೆ. ಬಾಡಿಗೆ ವಿವಾದ ಸಂಬಂಧಿಸಿದ ವಿಚಾರವನ್ನು ಪರಿಗಣಿಸುವ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ (AI) ಸಾಧನವನ್ನು ಬಳಸಿ ಪುನರಾವರ್ತಿತವಾಗಿ ಸಲ್ಲಿಸಲಾದ ಲಿಖಿತ ವಾದಗಳು ಹಾಗೂ ಉಲ್ಲೇಖಿಸಲಾದ ತೀರ್ಪು ಎಲ್ಲಿಯೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, ನ್ಯಾಯಪೀಠವು ಇಂತಹ ಸಲ್ಲಿಕೆಗಳನ್ನು ಅತಿರೇಕವಾಗಿ ಕೋರ್ಟ್ ಮೇಲೆ ಎರಚುವ ಪದ್ಧತಿಯನ್ನು ಖಂಡಿಸಿ, ಅದನ್ನು ಆರಂಭದಲ್ಲೇ ತಡೆಹಿಡಿಯಬೇಕೆಂದು ತೀರ್ಮಾನಿಸಿದೆ. ಸಂಬಂಧರಹಿತ ಅಥವಾ ಅಸ್ತಿತ್ವದಲ್ಲೇ ಇಲ್ಲದ ದಾಖಲೆಗಳನ್ನು ಕೋರ್ಟ್ ಪರಿಶೀಲಿಸುವಂತೆ ಮಾಡುವುದು ನ್ಯಾಯಾಂಗ ಸಮಯದ ದುರ್ಬಳಕೆಯಾಗುತ್ತದೆ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಸಂವಿಧಾನದ ಅನುಚ್ಛೇದ 227ರ ಅಡಿಯಲ್ಲಿ ಸಲ್ಲಿಸಲಾದ ಈ ಅರ್ಜಿಯಲ್ಲಿ, ಮಹಾರಾಷ್ಟ್ರ ಬಾಡಿಗೆ ನಿಯಂತ್ರಣ ಕಾಯ್ದೆ, 1999 (MRC Act) ರ ಸೆಕ್ಷನ್ 44ರ ಅಡಿಯಲ್ಲಿ ಸಲ್ಲಿಸಲಾದ ರಿವಿಷನ್ ಅರ್ಜಿಯಲ್ಲಿ ಕೊಂಕಣ ವಿಭಾಗದ ಹೆಚ್ಚುವರಿ ಆಯುಕ್ತರು ನೀಡಿದ ತೀರ್ಪನ್ನು ಪ್ರಶ್ನಿಸಲಾಗಿತ್ತು. ಆ ತೀರ್ಪಿನಲ್ಲಿ, ಸಕ್ಷಮ ಪ್ರಾಧಿಕಾರ ನೀಡಿದ್ದ ತೆರವು (ಎವಿಕ್ಷನ್) ಆದೇಶವನ್ನು ರದ್ದುಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಲೈಸೆನ್ಸರ್ / ಮಾಲೀಕರು ಹೈಕೋರ್ಟ್ ಮೊರೆಹೋಗಿದ್ದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಂ. ಸಠಾಯೆ ಅವರ ಏಕಸದಸ್ಯ ಪೀಠವು ಲಿಖಿತ ವಾದಗಳು AI ಸಾಧನ ಬಳಸಿ ತಯಾರಿಸಲ್ಪಟ್ಟಿವೆ ಎಂಬ ಅಂಶವನ್ನು ಗಮನಿಸಿತು. ‘ಜ್ಯೋತಿ w/o ದಿನೇಶ್ ತುಲಿಯಾನಿ ವಿರುದ್ಧ ಎಲೆಗಂಟ್ ಅಸೋಸಿಯೇಟ್ಸ್’ ಎಂಬ ಒಂದೇ ಒಂದು ತೀರ್ಪಿನ ಉಲ್ಲೇಖವನ್ನು ಮಾಡಲಾಗಿದೆ. ಆದರೆ ಅದರ ಉಲ್ಲೇಖ ಸಂಖ್ಯೆ (citation) ನೀಡಿಲ್ಲ, ಜೊತೆಗೆ ತೀರ್ಪಿನ ಪ್ರತಿಯನ್ನೂ ಸಲ್ಲಿಸಿಲ್ಲ. ಈ ನ್ಯಾಯಾಲಯ ಮತ್ತು ನ್ಯಾಯಾಲಯದ ಕಾನೂನು ಸಹಾಯಕರು ಈ ತೀರ್ಪನ್ನು ಹುಡುಕಲು ಬಹಳ ಪ್ರಯತ್ನಪಟ್ಟರೂ ಅದು ಎಲ್ಲಿಯೂ ಸಿಕ್ಕಿಲ್ಲ. ಇದರಿಂದ ಅಮೂಲ್ಯವಾದ ನ್ಯಾಯಾಂಗ ಸಮಯ ವ್ಯರ್ಥವಾಗಿದೆ. ಸಂಶೋಧನೆಗಾಗಿ AI ಸಾಧನವನ್ನು ಬಳಸುವುದು ಸ್ವಾಗತಾರ್ಹವಾದುದೇ ಆಗಿದೆ. ಆದರೆ ಅಂತಹ ಸಾಧನಗಳನ್ನು ಬಳಸುವ ಪಕ್ಷಕ್ಕೂ, ವಕೀಲನಿಗೂ, ಉಲ್ಲೇಖಗಳನ್ನು ಕ್ರಾಸ್-ಪರಿಶೀಲನೆ ಮಾಡಿ, ಯಂತ್ರ/ಕಂಪ್ಯೂಟರ್ ತಯಾರಿಸಿದ ವಿಷಯವು ನಿಜವಾಗಿಯೂ ಸಂಬಂಧಿತವಾಗಿದೆಯೇ, ನಿಜವಾದ ಆಗಿದೆಯೇ ಹಾಗೂ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ಇದೆ. ಪ್ರತಿವಾದಿ ವಿಷಯದ ಪರಿಶೀಲನೆ ಮಾಡದೇ ಕೇವಲ ಸಹಿ ಮಾಡಿ ಲಿಖಿತ ವಾದಗಳನ್ನು ಸಲ್ಲಿಸಿದ್ದಾನೆ ಎಂದು ಎಂದು ನ್ಯಾಯಪೀಠ ಗರಂ ಆಯಿತು.

ಹಾಗೆಯೇ ವಕೀಲನಿಗೆ ಸಂಬಂಧರಹಿತ ಅಥವಾ ಅಸ್ತಿತ್ವದಲ್ಲೇ ಇಲ್ಲದ ದಾಖಲೆಗಳು / ಸಲ್ಲಿಕೆಗಳನ್ನು ಕೋರ್ಟ್ ಮೇಲೆ ಎರಚಿ, ಕೋರ್ಟ್ ಅವುಗಳನ್ನು ಪರಿಶೀಲಿಸುವಂತೆ ಮಾಡುವ ಪದ್ಧತಿ ಖಂಡನೀಯವಾಗಿದ್ದು, ಅದನ್ನು ಆರಂಭದಲ್ಲೇ ನಿಗ್ರಹಿಸಬೇಕು. ಇದು ನ್ಯಾಯಾಲಯಕ್ಕೆ ಸಹಾಯ ಮಾಡುವುದಲ್ಲ; ವೇಗವಾಗಿ ನ್ಯಾಯ ವಿತರಣೆಗೆ ಅಡ್ಡಿಯಾಗಿದೆ. ಇಂತಹ ಪದ್ಧತಿಯನ್ನು ಈ ನ್ಯಾಯಾಲಯ ಸಹಿಸುವುದಿಲ್ಲ ಹಾಗೂ ಇದರಿಂದ ವೆಚ್ಚ ವಿಧಿಸುವ ಪರಿಸ್ಥಿತಿ ಉಂಟಾಗುತ್ತದೆ. ಯಾವುದೇ ವಕೀಲರು ಇಂತಹ ಪದ್ಧತಿಯಲ್ಲಿ ತೊಡಗಿರುವುದು ಕಂಡುಬಂದರೆ, ಬಾರ್ ಕೌನ್ಸಿಲ್ ಗೆ ಉಲ್ಲೇಖಿಸುವಂತಹ ಇನ್ನೂ ಕಠಿಣ ಕ್ರಮವೂ ಕೈಗೊಳ್ಳಬಹುದು ಎಂದು ನ್ಯಾಯಪೀಠವು ಎಚ್ಚರಿಸಿತು

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.