ನ್ಯಾಯಾಂಗ ಜವಾಬ್ದಾರಿಯುತ ಸಂಸ್ಥೆಯಾಗಲು ಪ್ರಾಮಾಣಿಕ, ರಚನಾತ್ಮಕ ಟೀಕೆ ಅಗತ್ಯ – CJI ಸೂರ್ಯಕಾಂತ್
ನವದೆಹಲಿ: ನ್ಯಾಯಾಂಗವು ಜವಾಬ್ದಾರಿಯುತ ಸಂಸ್ಥೆಯಾಗಲು ಪ್ರಾಮಾಣಿಕ ಮತ್ತು ರಚನಾತ್ಮಕ ಟೀಕೆ ಅಗತ್ಯ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನುಡಿದಿದ್ದಾರೆ.
ನವದೆಹಲಿಯಲ್ಲಿ ನಡೆದ 6ನೇ ರಾಮ್ ಜೇಠ್ಮಲಾನಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್ ಅವರು, ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳಲು ನ್ಯಾಯಾಂಗವು ಪರಿಶೀಲನೆ ಮತ್ತು ಟೀಕೆಗೆ ಮುಕ್ತವಾಗಿರಬೇಕು. ನ್ಯಾಯಾಲಯವು ಇಷ್ಟಪಡುವ ಮೂಲಕ ಅಥವಾ ಜನರು ಬಯಸಿದ ಫಲಿತಾಂಶಗಳನ್ನು ನೀಡುವ ಮೂಲಕ ವಿಶ್ವಾಸವನ್ನು ಗಳಿಸುವುದಿಲ್ಲ. ಸಂಪೂರ್ಣವಾಗಿ ವಿಭಿನ್ನ ಫಲಿತಾಂಶವನ್ನು ಬಯಸಿದ ಜನರು, ತಮ್ಮ ವಿರುದ್ಧ ತೀರ್ಪು ನೀಡಿದ ಪ್ರಕ್ರಿಯೆಯು ನ್ಯಾಯಯುತವಾಗಿದೆ ಎಂದು ನಂಬಿ ಹೊರನಡೆದಾಗ ಮಾತ್ರ ವಿಶ್ವಾಸವನ್ನು ಗಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಎನ್ ಸಿಇಆರ್ಟಿ ಪಠ್ಯಪುಸ್ತಕ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೈಗೊಂಡ ಕ್ರಮವನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಪರಿಶೀಲನೆಯಿಂದ ದೂರವಿಡುವುದರಿಂದ ಸಂಸ್ಥೆಗಳು ಶುದ್ಧವಾಗಿ ಉಳಿಯುವುದಿಲ್ಲ, ಬದಲಿಗೆ ನಿರಂತರ ಪರಿಶೀಲನೆಗೆ ಒಳಪಟ್ಟರೂ ಸಮರ್ಥವಾಗಿ ಉಳಿದುಕೊಳ್ಳುವುದರಿಂದಲೇ ಅವು ಶುದ್ಧತೆಯನ್ನು ಕಾಯ್ದುಕೊಳ್ಳುತ್ತವೆ ಎಂದು ಪ್ರತಿಪಾದಿಸಿದರು.
ನ್ಯಾಯಾಂಗ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆಯು ಕೇವಲ ಮುಕ್ತ ನ್ಯಾಯಾಲಯದ ಕಲಾಪಗಳು ಮತ್ತು ಸಾರ್ವಜನಿಕ ವಿಚಾರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತೀರ್ಪಿನಿಂದ ಪ್ರತಿಕೂಲ ಪರಿಣಾಮ ಎದುರಿಸಿದವರೂ ಸೇರಿದಂತೆ ಎಲ್ಲರೂ ತೀರ್ಪುಗಳಿಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಲು ಅವಕಾಶವಿರುವುದೂ ಇದರ ವ್ಯಾಪ್ತಿಗೆ ಬರುತ್ತದೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
