ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ – ಅತಿಯಾದ ವಿದ್ಯಾರ್ಹತೆ ವಿವಾದ ಕುರಿತು ಸ್ಪಷ್ಟ ತೀರ್ಪು ಕೊಟ್ಟ ಸುಪ್ರೀಂ
ನವದೆಹಲಿ: ಕಡಿಮೆ ವಿದ್ಯಾರ್ಹತೆಯ ಹುದ್ದೆಗೆ ಅತಿಯಾದ ಅರ್ಹತೆ ಹೊಂದಿದವರು ಹಕ್ಕು ಸಾಧಿಸುವಂತಿಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ ಸಿಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಾತ್ಕಾಲಿಕ ಬ್ಯಾಂಕ್ ಅಟೆಂಡೆಂಟ್ ಒಬ್ಬರನ್ನು ಕೆಲಸಕ್ಕೆ ಮರು ನೇಂಕಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹದೇವನ್ ಅವರ ಪೀಠವು ಈ ತೀರ್ಪು ನೀಡಿದೆ.
ಕಡಿಮ ವಿದ್ಯಾರ್ಹತೆ ಹೊಂಧಿರುವವರಿಗೆ ಮೀಸಲಿಟ್ಟ ಕೆಲಸವನ್ನು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿ ಪಡೆದುಕೊಳ್ಳಲು ಅನುಮತಿ ನೀಡುವುದರಿಂದ ನಿಜವಗಿಯೂ ಆ ಹುದ್ದೆಗೆ ಅರ್ಹರಾದ ಅಭ್ಯರ್ಥಿಯ ಅವಕಾಶ ಕಸಿದುಕೊಂಡಂತಾಗುತ್ತದೆ . ನಿಗದಿತ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಾವಕಾಶಗಳು ಸಿಗುವಂತೆ ಮಾಡಬೇಕು. ನಿಗದಿತ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆಗಿಂತ ಹೆಚ್ಚಿನ ಪದವಿ ಪಡೆದ ಅಭ್ಯರ್ಥಿಗಳು, ಕೇವಲ ತಾವು ಹೆಚ್ಚು ಓದಿದ್ದೇವೆ ಎಂಬ ಕಾರಣಕ್ಕೆ ಆ ಹುದ್ದೆಯನ್ನು ಪಡೆಯಲು ಹಕ್ಕಿನಿಂದ ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಯಾವುದೇ ಒಂದು ಹುದ್ದೆಗೆ ನೇಮಕಾತಿ ಮಾಡುವಾಗ, ಆ ಹುದ್ದೆಯ ನಿರ್ವಹಣೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯೇ ಮಾನದಂಡವಾಗಬೇಕು. ಅತಿಯಾದ ಅರ್ಹತೆ ಹೊಂದಿದವರು ಆ ಹುದ್ದೆಗೆ ಸೂಕ್ತವಲ್ಲ ಎಂದು ಉದ್ಯೋಗದಾತರು ಪರಿಗಣಿಸಿದರೆ, ಅದನ್ನು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅಭ್ಯರ್ಥಿ ಸೂಕ್ತ ಮತ್ತು ಯಾರಿಗೆ ಆದ್ಯತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಉದ್ಯೋಗದಾತರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಅರ್ಹತೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ನೇಮಿಸಿಕೊಳ್ಳಲೇಬೇಕೆಂಬ ನಿಯಮವಿಲ್ಲ. ಅತಿಯಾದ ಅರ್ಹತೆ ಹೊಂದಿದವರು ಭವಿಷ್ಯದಲ್ಲಿ ಆ ಕೆಲಸದಲ್ಲಿ ಅತೃಪ್ತಿ ಹೊಂದಬಹುದು ಅಥವಾ ಬೇರೆ ಉತ್ತಮ ಅವಕಾಶ ಸಿಕ್ಕಾಗ ಹುದ್ದೆಯನ್ನು ಬಿಟ್ಟು ಹೋಗಬಹುದು ಎಂಬ ಆತಂಕ ಉದ್ಯೋಗದಾತರಿಗೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹುದ್ದೆಗೆ ಸರಿಹೊಂದುವವರನ್ನೇ ಆಯ್ಕೆ ಮಾಡುವುದು ಆಡಳಿತಾತ್ಮಕವಾಗಿ ಸರಿಯಾದ ಕ್ರಮ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
