ಅಮಲ್ಜಾರಿ ಕೇಸ್: ಜಾರಿ ನ್ಯಾಯಾಲಯಕ್ಕೆ ವಿಚಾರಣಾ ನ್ಯಾಯಾಲಯದ ಪಾತ್ರ ನಿರ್ವಹಿಸುವ ಅಧಿಕಾರ ವ್ಯಾಪ್ತಿ ಇಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಅಮಲ್ಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕ್ರಿ ಜಾರಿಗೊಳಿಸುವ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ. ಜಾರಿ ನ್ಯಾಯಾಲಯಕ್ಕೆ ವಿಚಾರಣಾ ನ್ಯಾಯಾಲಯದ ಪಾತ್ರ ನಿರ್ವಹಿಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಡಿಕ್ರಿ ಜಾರಿಗೊಳಿಸುವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯು ಅಂಗೀಕರಿಸಿದ ತೀರ್ಪನ್ನು ಜಾರಿಗೆ ತರಲು ಮಾತ್ರ ಸೀಮಿತವಾಗಿದೆ. ತೀರ್ಪಿನ ಅಡಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಬದಲಾಗಿ ತನ್ನದೇ ಆದ ದೃಷ್ಟಿಕೋನವನ್ನು ಬದಲಿಸಲು ವಿಚಾರಣಾ ನ್ಯಾಯಾಲಯದ ಪಾತ್ರವನ್ನು ವಹಿಸಿಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಜಾರಿ ನ್ಯಾಯಾಲಯವು ಡಿಕ್ರಿಯ ಜಾರಿ, ಬಾಧ್ಯತೆ ಮುಕ್ತ ಹಾಗೂ ತೀರ್ಪುಋಣಿಗೆ ಪೂರ್ತಿ ಹಣ ಸಂದಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರ್ಧರಿಸಲು ಅಧಿಕಾರ ಹೊಂದಿದೆ. ಆದರೆ, ಕಾರ್ಯಗತಗೊಳಿಸಲು ಬಯಸುವ ತೀರ್ಪನ್ನು ಮೀರಿ ಹೋಗಲು ಯಾವುದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ. ಡಿಕ್ರಿ ತೀರ್ಪನ್ನು ಬದಲಾಯಿಸದೆಯೇ ಅದನ್ನು ಹಾಗೆಯೇ ಕಾರ್ಯಗತಗೊಳಿಸಬೇಕು. ಜಾರಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಅಂಗೀಕರಿಸಿದ ತೀರ್ಪನ್ನು ಜಾರಿಗೆ ತರಲು ಸೀಮಿತವಾಗಿದೆ ಮತ್ತು ತೀರ್ಪಿನ ಅಡಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಬದಲಾಗಿ ತನ್ನದೇ ಆದ ದೃಷ್ಟಿಕೋನವನ್ನು ಬದಲಿಸಲು ವಿಚಾರಣಾ ನ್ಯಾಯಾಲಯದ ಪಾತ್ರವನ್ನು ವಹಿಸಿಕೊಳ್ಳಬಾರದು ಎಂದು ಕಾನೂನಿನಲ್ಲಿ ನಿರ್ಧರಿಸಲಾಗಿದೆ.” ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
